ರಸದೊಳಗೆ ಕಸ

‘ಯಾರು ತುಂಬಿಟ್ಟರೋ
ಈ ಬಿಳಿಬಿಳಿ ಅಕ್ಕಿಯೊಳಗೆ
ನೊರಜುಗಲ್ಲು
ಕರಿ ಮಣ್ಣೆಂಟೆ
ಹುಲ್ಲು ಬೀಜ
ಭತ್ತ, ಹೊಟ್ಟು?’

ಸದಾ ಇವರ ಗೊಣಗು
ಮೊಗದಲ್ಲಿಲ್ಲ ನಗು
ಎಲ್ಲ ಶುದ್ಧವಿರಬೇಕು
ಬೇಕೆಂದಾಕ್ಷಣ ಬಳಸುವಂತಿರಬೇಕು
ಇವರಿಗೆ ತಿಳಿದಿಲ್ಲ
ತಪ್ಪು ಅಕ್ಕಿಯದಲ್ಲ !

ಇದೆಲ್ಲ ಇಲ್ಲಿ ಸಹಜ
ಅವಿಲ್ಲದಿದ್ದರೆ ಎಲ್ಲಿ ಮಜ?

ತೊನೆದ ತೆನೆಗಳಲಿ
ಮೂಡಿದ ಭತ್ತವ
ಮತ್ತೆ ನೆಲಕ್ಕೊಗೆಯಬೇಕು
ತೆನೆಯುಜ್ಜಿ ಕಾಳು ಬೇರ್ಪಡಿಸಬೇಕು
ಮಣ್ಣು – ಕಲ್ಲಲಿ ಬೆರೆತ
ತೆಗೆದೊಗೆದು ತನ್ನನಾವರಿಸಿದ ಹುತ್ತ
ಬಿಳಿ ಕಾಳಾಗಬೇಕು

ಜೊತೆಗೊಂದೋ ಎರಡೋ
ಮೂಲರೂಪದ ಭತ್ತ
ಮಣ್ಣಲ್ಲಿ ಬೆಳೆದ ಸಾಕ್ಷಿಗೆ
ಕಲ್ಲು ಕರಿ ಮಣ್ಣೆಂಟೆ
ನೆರೆಹೊರೆಯ ಹುಲ್ಲುಬೀಜ
ಜೊತೆಗಿಲ್ಲದಿದ್ದರುಂಟೆ?

ಕಸದೊಳಗೆ ರಸ
ರಸದೊಳಗೆ ಕಸ!
ಕಸವೆಸೆದ ರಸ ಮಾನ್ಯ
ಗುರುತಿಸುವ ಮನ ಧನ್ಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೆಂದು ಹಾಡಲಿ
Next post ಬಂಜೆಯರಿಗೆ ತೊಟ್ಟಿಲು ಭಾಗ್ಯದ ಪ್ರಣಾಳ ಶಿಶುಗಳು

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys